ಸ್ತ್ರೀ ವೇದನೆ

ಇಹಸುಖಕ್ಕೂ ನಾರಿ
ಪರಪ್ರಾಪ್ತಿಗೂ ನಾರಿ
ಸಕಲ ಸಂಪದಕೂ ನಾರಿ
ಕೂಗಿದರೂ ಸಾರಿ ಸಾರಿ

ತಿಳಿದವರು ಬಹಳಂತೆ
ತರತರದ ಕಹಳೆ
ತುದಿ ಮೊದಲು ಅರಿಯದೋಲ್
ಬರಿಯ ಬೊಗಳೆ

ಸ್ನಿಗ್ಧ ಪ್ರೇಮದ ನೆಪ ಮಾಡಿ
ಮುಗ್ಧ ಮನಗಳ ಜೊತೆಯಾಡಿ
ತಳ್ಳುವರು ಒಲವ
ಕೆಂಪು ದೀಪದ ಅಡಿಗೆ
ದೂಡುವರು ಅಬಲೆಯರ
ಸರ್ವನಾಶದ ಕಡೆಗೆ

ಮುದ್ದುಗಂಗಳ ಮುಗ್ಧ ಮುಖಕ್ಕೂ
ನೆತ್ತರನು ತಿಕ್ಕಿ
ಗಣಿಸುವನು ಪಾಪಿ
ಆನಂದವನು ಹೆಕ್ಕಿ
ಗಂಡಲ್ಲನಿವ ತಿಕ್ಕಲು ಭಂಡ
ತೃಷೆಗಿಲ್ಲ ಇವನಲ್ಲಿ
ಲಗಾಮು ದಂಡ

ಪತ್ರಿಕೆಯ ಪುಟಪುಟದಿ
ಶೀಲಹರಣದ ಕಥೆಯು
ಭದ್ರತೆಯ ಕೋಟೆಯಲ್ಲೂ
ಮಾನಹಾನಿಯ ವ್ಯಥೆಯೂ

*****

Previous post ೧೬ ನೋಡಬೇಡ ತಿರುಗಿ
Next post ಕಾಮ ದಹನ ೧೯೮೩

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

cheap jordans|wholesale air max|wholesale jordans|wholesale jewelry|wholesale jerseys